Nature is yet so beautiful.... does that matter any to a painful heart??
ಉಸಿರಾಡುವ ಚಿಗುರು ಎಲೆ ಬಳ್ಳಿ....
ಮಡಿದ ಸ್ತಬ್ಧ ಹೃದಯದ ಹ೦ಬಲ
ವಿನೋದತು೦ಬಿ ಅರಳಿನಿ೦ತ ಕುಸುಮ....
ಮರೆಯಾದ ಹಸಿನಗೆಯೆ ಜೀವ ವ್ಯಥೆ
ನವ್ಯ ಕೋಟಿ ಬೆಳಕಿನ ಸೂರ್ಯಕಿರಣ......
ಕುರುಡು ಭಾವ ಪಸರಿದ ಮ೦ಕು ಮನ
ಪಿಸುಗುಡುವ ಹಕ್ಕಿಗಳ ಸಾಲು ಸಾಲು....
ಮೌನರಾಗ ಹಿಡಿದು ಮುಗಿಬಿದ್ದ ಸೋಲು
ಒಲವು ತು೦ಬಿ-ತುಳುಕುವ ನೀರ್ಜರಿಯ ಜುಳುಜುಳು....
ಆದರೂನು ಒ೦ಟಿತನದ ಮೂಕ ಅಳಲು
ಹುಣ್ಣಿಮೆ ಬೆಳದಿ೦ಗಳು ತ೦ಪು ಮಿಡಿಯೊ ಗಾನ....
ಬೆಳಕಿ೦ದ ದೂರ ಸರಿಯೆ ಚುಚ್ಚುತಿದೆ ಒಳಗಣ್ಣ
ಸ್ನೇಹ ಕೋರಿನಿ೦ತ ನಸುನಗುವ ನೇಸರ....
ಬಿಟ್ಟು ಹೋದ ಸ್ನೇಹವ ನೆನೆ-ನೆನೆದು ಬೇಸರ
ಪ್ರೇರಣೆಯೆ ಬದುಕೆ೦ದು ಸಾರೊ ಭಾವ ಗೀತೆ....
ಜೀವಕ್ಕೊ೦ದು ಸಾಲು ಮುಕ್ತಿಗೆ ಹ೦ಸ ಗೀತೆ.....ಹ೦ಸ ಗೀತೆ.
Monday, August 24, 2009
Subscribe to:
Post Comments (Atom)
ಟೂರಿಸ್ಟ್ ಫ್ಯಾಮಿಲಿ ...Tourist Family, an ode to humanity & compassion :)
ಸ್ವಾರ್ಥ ಮತ್ತು ಸ್ವಲಾಭ ತುಂಬಿರುವ ಇಂದಿನ ಅಪ್ರಾಮಾಣಿಕ ವಾತಾವರಣದಲ್ಲಿ ಮಾನವೀಯತೆ ಹಾಗೂ ವಿಶ್ವಾಸವೆಂಬ ಅಸ್ತ್ರಗಳು ಧರ್ಮ, ಪ್ರದೇಶ, ಪ್ರಾಂತ್ಯ ಹಾಗೂ ಭಾಷೆಗಳನ್ನು ಮೀರಿಸ...

-
"ರೂಪ ಮೇಡಂ, ನೀವು ಕೆಲಸ ಮಾಡುವ NGO ಬಗ್ಗೆ ಕೇಳಿದ್ದೇವೆ, ಯಾವಾಗ ಬಿಡುವಿರುತ್ತೆ ಹೇಳಿ ನಿಮ್ಮ ಜೊತೆ ನಾವು ಸಹ ಬರ್ತೀವಿ" ಅಂತ ನನ್ನ ಪರಿಚಯದವರೊಬ್ಬರು ಆಗಾ...
-
ಶಾನಭೋಗರ ಮನೆಯಲ್ಲಿಂದು ವಿಶೇಷ ಪೂಜೆ. ಎ೦ದಿನ೦ತೆ ಕೆ೦ಚಿ ಹೊ ಬುಟ್ಟಿ ಹೊತ್ತು ಅವರ ಮನೆಯ ಕಡೆ ಹೊರಟಳು. "ಎಷ್ಟೊತ್ತೆ ಕೆ೦ಚಿ! ಹೂ ತ೦ದ್ಯಾ?"......
-
ಸ್ವಾರ್ಥ ಮತ್ತು ಸ್ವಲಾಭ ತುಂಬಿರುವ ಇಂದಿನ ಅಪ್ರಾಮಾಣಿಕ ವಾತಾವರಣದಲ್ಲಿ ಮಾನವೀಯತೆ ಹಾಗೂ ವಿಶ್ವಾಸವೆಂಬ ಅಸ್ತ್ರಗಳು ಧರ್ಮ, ಪ್ರದೇಶ, ಪ್ರಾಂತ್ಯ ಹಾಗೂ ಭಾಷೆಗಳನ್ನು ಮೀರಿಸ...
jeevanada ella vismaya,jagada jeevagala kalarava, prakrutiya kana kanavu nimma kavanadali seri pisumaatinale jeevanada saaravanu heluttive mana arivante....sahayatri.
ReplyDeleteakka comparision..superb..kavananu superb..:)
ReplyDeletethanks to EEsha and Shruthi :-)
ReplyDelete