ಬರೆದು ಮನದಟ್ಟಾಗಿಸಬೇಕು....
ಮನದ ಮರೆಯ ನೆನಪು,
ಹೃದಯದ ಆಸುಪಾಸಿನಲ್ಲಿ
ಬೆಚ್ಚಗಿನ ಕಾವು!!!
ಮನದ ಮರೆಯ ನೆನಪು,
ಹೃದಯದ ಆಸುಪಾಸಿನಲ್ಲಿ
ಬೆಚ್ಚಗಿನ ಕಾವು!!!
ನೆನೆದು ಮರೆತುಬಿಡಬೇಕು....
ಕಣ್ಣಂಚಿನಲ್ಲೇ ಕುಳಿತು ಒಳಗೆ ಬಾರದ ನಿದಿರೆ!
ಬಡಬಡಿಕೆಯ ಉಸ್ತುವಾರಿಯಲ್ಲಿ
ಕಳೆದುಬಿಡುವ ಮುಂಜಾವು!!!
ಕಣ್ಣಂಚಿನಲ್ಲೇ ಕುಳಿತು ಒಳಗೆ ಬಾರದ ನಿದಿರೆ!
ಬಡಬಡಿಕೆಯ ಉಸ್ತುವಾರಿಯಲ್ಲಿ
ಕಳೆದುಬಿಡುವ ಮುಂಜಾವು!!!
ಆರಾಧಿಸಿ ಸ್ತುತಿಸಬೇಕು....
ಅಲಕ್ಷಿಸಿ, ಕಡೆಗಣಿಸಿದ ಕ್ಷಣಗಳ,
ಪ್ರೀತಿಯಲ್ಲಿನ ವೈಕಲ್ಯ .... ಮತ್ತೆ
ಶರಣಾಗತಿಯಲ್ಲಿನ ಜಾಣ್ಮೆ!!!
ಅಲಕ್ಷಿಸಿ, ಕಡೆಗಣಿಸಿದ ಕ್ಷಣಗಳ,
ಪ್ರೀತಿಯಲ್ಲಿನ ವೈಕಲ್ಯ .... ಮತ್ತೆ
ಶರಣಾಗತಿಯಲ್ಲಿನ ಜಾಣ್ಮೆ!!!
ಪ್ರಸವವದು ಅರಿವಿರಬೇಕು....
ಕೊಲ್ಲುವ ಆ ಪ್ರಕ್ಷುಬ್ಧ ಭಾವನೆಗಳ
ಮರುಜನ್ಮಕ್ಕೆ ಕಾರಣ
ಆ ನೋಟ... ಅವನ ಕುಡಿನೋಟ !!!
ಕೊಲ್ಲುವ ಆ ಪ್ರಕ್ಷುಬ್ಧ ಭಾವನೆಗಳ
ಮರುಜನ್ಮಕ್ಕೆ ಕಾರಣ
ಆ ನೋಟ... ಅವನ ಕುಡಿನೋಟ !!!
ಮುಂಜಾವಿನ ಹೊತ್ತಿಗೆ
ಮುಗುದೆಯ ಚಡಪಡಿಕೆ
ಕಳೆದು ಹೋದಳೆಂದು ಊರಲ್ಲೆಲ್ಲಾ ಗುಲ್ಲು
ತನ್ನನ್ನೇ ತಾನು ಹುಡುಕಿಕೊಳ್ಳುವ ನಕಲಿ ಕನಸು!!!
ಮುಗುದೆಯ ಚಡಪಡಿಕೆ
ಕಳೆದು ಹೋದಳೆಂದು ಊರಲ್ಲೆಲ್ಲಾ ಗುಲ್ಲು
ತನ್ನನ್ನೇ ತಾನು ಹುಡುಕಿಕೊಳ್ಳುವ ನಕಲಿ ಕನಸು!!!
- RS
ಈ ಕವನವು ಓದುಗನ ಭಾವನೆಗಳನ್ನು ಅಲ್ಲೋಲಕಲ್ಲೋಲವಾಗಿಸುತ್ತದೆ. ಅಭಿನಂದನೆಗಳು.
ReplyDeletesunaath kaka.... dhanyavaada nimma abhipraayakke :)
DeleteSuperb 😗😗
ReplyDeleteThank you :)
Delete