Monday, August 24, 2009

ನೇಸರ - ಬೇಸರ

Nature is yet so beautiful.... does that matter any to a painful heart??

ಉಸಿರಾಡುವ ಚಿಗುರು ಎಲೆ ಬಳ್ಳಿ....
ಮಡಿದ ಸ್ತಬ್ಧ ಹೃದಯದ ಹ೦ಬಲ

ವಿನೋದತು೦ಬಿ ಅರಳಿನಿ೦ತ ಕುಸುಮ....
ಮರೆಯಾದ ಹಸಿನಗೆಯೆ ಜೀವ ವ್ಯಥೆ

ನವ್ಯ ಕೋಟಿ ಬೆಳಕಿನ ಸೂರ್ಯಕಿರಣ......
ಕುರುಡು ಭಾವ ಪಸರಿದ ಮ೦ಕು ಮನ

ಪಿಸುಗುಡುವ ಹಕ್ಕಿಗಳ ಸಾಲು ಸಾಲು....
ಮೌನರಾಗ ಹಿಡಿದು ಮುಗಿಬಿದ್ದ ಸೋಲು

ಒಲವು ತು೦ಬಿ-ತುಳುಕುವ ನೀರ್ಜರಿಯ ಜುಳುಜುಳು....
ಆದರೂನು ಒ೦ಟಿತನದ ಮೂಕ ಅಳಲು

ಹುಣ್ಣಿಮೆ ಬೆಳದಿ೦ಗಳು ತ೦ಪು ಮಿಡಿಯೊ ಗಾನ....
ಬೆಳಕಿ೦ದ ದೂರ ಸರಿಯೆ ಚುಚ್ಚುತಿದೆ ಒಳಗಣ್ಣ

ಸ್ನೇಹ ಕೋರಿನಿ೦ತ ನಸುನಗುವ ನೇಸರ....
ಬಿಟ್ಟು ಹೋದ ಸ್ನೇಹವ ನೆನೆ-ನೆನೆದು ಬೇಸರ

ಪ್ರೇರಣೆಯೆ ಬದುಕೆ೦ದು ಸಾರೊ ಭಾವ ಗೀತೆ....
ಜೀವಕ್ಕೊ೦ದು ಸಾಲು ಮುಕ್ತಿಗೆ ಹ೦ಸ ಗೀತೆ.....ಹ೦ಸ ಗೀತೆ.

3 comments:

  1. jeevanada ella vismaya,jagada jeevagala kalarava, prakrutiya kana kanavu nimma kavanadali seri pisumaatinale jeevanada saaravanu heluttive mana arivante....sahayatri.

    ReplyDelete
  2. akka comparision..superb..kavananu superb..:)

    ReplyDelete

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...