Monday, November 28, 2011

ಭಾವಸಿಂಚನ ... stage ಮೇಲೆ..

3K ಸಮುದಾಯದ ಚೊಚ್ಚಲ ಪ್ರಕಟಣೆ... ಕವಿಗಳಲ್ಲದವರ ಕವನಗಳ ಗುಂಜನ ಭಾವಸಿಂಚನ
ಈ ಸಮುದಾಯ ನನ್ನ ಮನಸಿಗೆ ತುಂಬಾ ಹತ್ತಿರ. ಎಲ್ಲರೂ ರೂಪಕ್ಕ ಅಂತ ಕರೆಯೋದು ಇದಕ್ಕೆ ಕಾರಣ ಇರಬಹುದು....
ಕಳೆದುಕೊಂಡ ಪ್ರೀತಿಯ ತಮ್ಮನ ನೆನಪು ಎಂದಿಗೂ ಆರದು. ಅವನು ಇಲ್ಲೇ ನನ್ನ ಜೊತೆಯಲ್ಲೇ ಇದ್ದಾನೆ ಅಂತ ಸಾರಿ ಸಾರಿ ಹೇಳೋಕೆ, 3K ಯ ಗೆಳೆಯರೆಲ್ಲರಿಂದಲೂ ರೂಪಕ್ಕ ಅಂತ ಕರೆಸಿಕೊಂಡು ಅವನು ನನ್ನೊಡನೆ ಇದ್ದಾನೆ ಅಂತ್ ಸಂತೃಪ್ತಳಾಗೋಕೆ !

ಇನ್ನು 26 ನವೆಂಬರ್ 3K ಯ ಇತಿಹಾಸದಲ್ಲಿ ಇದೊಂದು ಸುದಿನ. ಕನ್ನಡ ಸಾಹಿತ್ಯ ಪರಿಷತ್ನಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ದುಂಡಿರಾಜ್ ಸರ್, ಕವಿರಾಜ್ ರವರು ಹಾಗು ನನ್ನ ಸ್ನೇಹಿತರು ಲೇಖಕರು ಆದ ಮಂಜುನಾಥ್ ಕೊಳ್ಳೆಗಾಲ ... ಇವರಿಂದಲೇ ಪುಸ್ತಕದ ಬಿಡುಗಡೆ ಆಗಿದ್ದು. ಭಾವಸಿಂಚನದ ಸಾರ್ಥಕತೆ ಯಾದದ್ದು.

3K ತಂಡ ಇದಕ್ಕಾಗಿ ಪಟ್ಟ ಪರಿಶ್ರಮ ನನಗೆ ಗೊತ್ತಿದೆ! ಇವರನ್ನ ನನ್ನ ಅಣ್ಣ ತಮ್ಮಂದಿರು ಅಂತ ಹೇಳಿಕೊಳ್ಳೋಕೆ ನನಗೆ ಹೆಮ್ಮೆ. ಆ ರೀತಿಯ ಒಂದು ಬಾಂಧವ್ಯ 3K ಶೃಷ್ಟಿಸಿದೆ!
--------------
ಇನ್ನು ಹೇಳಿಕೊಳ್ಳೋಕೆ ಆಗದ ಒಂದು ಸಂದಿಗ್ಧವೆಂದರೆ : ಅತಿಥಿಗಳೊಡನೆ stage ಮೇಲೆ ಕೂರುವುದು! ಅವರ ಮುಂದೆ ಕೂರುವ ಯೋಗ್ಯತೆ ಇರಲಿ, ನಿಲ್ಲುವ ಅರ್ಹತೆ ಸಹ ಇಲ್ಲದವಳು. ಎಂಥದೋ ಮುಜುಗರವಾಗ್ತಿತ್ತು, ಇರದ ಗಾಂಭೀರ್ಯ ತಾನಾಗೆ ಬಂದು ಮುಖದ ಮೇಲೆ ಬಂದು ಕುಳಿತಿತ್ತು... ದೇವರೇ ನನ್ನ ಸ್ನೇಹಿತರು ಇದಕ್ಕೆ ಬಲವಂತ ಮಾಡದೆ ಹೋಗಿದ್ದರೆ ನಾನು ನಾನಾಗೆ ಇರಬಹುದಿತ್ತು... ಇದೆಂಥ ಸಂಕಟ .... ಅಲ್ಲಿ ಹೇಗೆ ಕೂರಬೇಕು.. ಕೈ ಕಟ್ಟಿಕೊಂಡು ಕೂರಬೇಕ? ಕೈ ಬಿಟ್ಟು ಕುಂತರೆ ತಪ್ಪಾಗುತ್ತ... ಇಲ್ಲಸಲ್ಲದ confidence ತುಂಬಿಸಿಕೊಂಡು.... ಅಲ್ಲಿ ಇಲ್ಲಿ ನೋಡಿಕೊಂಡು ತೋರ್ಪಡಿಸದೆ ವಿಶ್ವ ಪ್ರಯತ್ನ ಮಾಡುತಿದ್ದೆ... ಇನ್ನು ಉಳಿದಂತೆ - Hall ನಲ್ಲಿ ಕುಂತ ಜನರ ಪೈಕಿ - ಯಾರಾದರು "ಈ ಹುಡುಗಿಯನ್ನೆಕೆ ಇಲ್ಲಿ ಕೂರಿಸಿದರು" ಅಂತ ನಗಾಡಿರ್ತಾರ...

ಈ ರೀತಿಯ ಕಾರ್ಯಕ್ರಮ ನನಗೂ ಹೊಸತು... blog ಪ್ರಪಂಚಕ್ಕೆ ಹೊಸಬಳಲ್ಲದಿದ್ದರು ಹೆಚ್ಚಾಗಿ ಬ್ಲಾಗಿಸುವುದು ಆಗದು... ನನಗೆ ಸಮಯದ ಕೊರತೆ .... ಕಾರ್ಯಕ್ರಮಕ್ಕೆ ಬಂದಂಥ ಹಿರಿಯರಲ್ಲಿ Manikanth AR, Prakash ಹೆಗ್ಡೆ ಯಂಥವರು ... ಇವರ ಮುಖ ಪರಿಚಯ ನನಗಿಲ್ಲ! ಇವರ ಬಗ್ಗೆ ಕೇಳಿದ್ದೆ ಆದರು ಇವರ ಪರಿಚಯವಾದಾಗಲು ನನಗೆ ಗಲಿಬಿಲಿ .... ಇವರೇನಾ ಅವರು... ಅಥವಾ ನಾನು ಕೇಳಿಸಿಕೊಂಡಿದ್ದು ಸರಿಯೇ... ಯಾವುದಕ್ಕೂ ಹೇಗೆ react ಮಾಡೋದು ಅಂತ ತಿಳಿಯದೆ ಒದ್ದಾಡಿದ್ದುಂಟು...

ಇದೆಂಥ ಪರಿಸ್ಥಿತಿ - ಮುಂದೆ ಈ ರೀತಿ ಆಗಬಾರದು - ಯಾರು ಎಷ್ಟೇ ಬಲವಂತ ಮಾಡಿದರು stage ಹತ್ತುವ ಸಾಹಸ ಮಾಡ ಬೇಡ ಅಂತ ನನ್ನ ಮನಸಿಗೆ ನಾನೇ ಸಾಂತ್ವನ ಹೇಳಿಕೊಳ್ಳಬೇಕಾಯ್ತು... "ನೋಡ್ರಪ್ಪ : ಇನ್ನು ಮುಂದೆ ನನಗೆ ಯಾವುದಾದರು chocolate ಹಂಚುವ ಕೆಲಸಗಳಿದ್ದರೆ ಮಾತ್ರ ಹೇಳಿ, ಏನಾದ್ರೂ ಮೈಕ್ ಹಿಡಿದು ಮಾತನಾಡಲು ಹೇಳಿ, ಆದರೆ ಅತಿಥಿಗಳೊಡನೆ ಕೂರಲು ಮಾತ್ರ ಹೇಳಬೇಡಿ.. "
ಅಲ್ಲಿ ಅಮ್ಮ - ಚಿಕ್ಕಪ್ಪ ಎಲ್ಲರೂ ಕುಳಿತು ನೋಡುತಿದ್ದಾರೆ... ಅವರಮುಂದೆ ನಾನು ಇಲ್ಲಿ ಕುಳಿತಿರುವುದು ಯಾವ ಚಂದ!
ಹೇಗೆ ಅನ್ನಿಸಿತ್ತೋ ಹಾಗೆ ಬರೆದಿರುವೆ... ಅಷ್ಟೇ !

Wednesday, November 23, 2011

ಕನಸಾಗಿದೆ

ಕನಸಾಗಿದೆ
ಆಕಾಶವೆಲ್ಲ ಒಂದು ಹಾಳೆಯಂತೆ
ಪತ್ರವೊಂದು ನನಗೆಂದೆ ಅದರೊಳಗೆ ಬರೆದಂತೆ
ಮಡಚಿ ಮಡಚಿ ಅಂಗಯಲ್ಲಿ ಅವಚಿ
ಬೆನ್ನ ಹಿಂದೆ ಬಚ್ಚಿಟ್ಟುಕೊಂಡಂತೆ !
ಕನಸಾಗಿದೆ
ಮಲ್ಲಿಗೆ ಹೂದೋಟವೆಲ್ಲ ಸುಂದರ ಚಿಂತ್ರದಂತೆ
ಗುಲಾಬಿಯೊಂದು ಅದರೊಳಗೆ ಬಿರಿದಂತೆ
ಕದ್ದ ಗುಲಾಬಿಯು ತೋರ್ಬೆರಳ ಚುಚ್ಚಿದರು
ನನಗೆಂದೆ ಕಿತ್ತು ಅವಿತಿಟ್ಟು ಕೊಂಡಂತೆ !
ಕನಸಾಗಿದೆ
ಕಡಲೆಲ್ಲ ಮನೆಯಂಗಳದಿ ಹರಿವ ನೀರಂತೆ
ಕಾಗದದ ದೋಣಿಗಳ ಹರಿಬಿಟ್ಟಂತೆ
ಕಡಲೊಳಗೆ ಧುಮುಕಿ ಮುತ್ತೊಂದ ಹೆಕ್ಕಿ
ದೋಣಿಯೊಳಗಿಟ್ಟು ನನ್ನೆಡೆ ರವಾನಿಸಿದಂತೆ !
ಕನಸಾಗಿದೆ
ದೊಡ್ಡ ಹನಿಗಳ ಪುಟ್ಟ ಮಳೆಯೊಂದು ಸುರಿವಂತೆ
ಕೊರೆವ ಛಳಿಯ ಮರೆತು ನೆನೆದಿರುವೆ ಮನಬಂದಂತೆ
ಸಣ್ಣ ಜ್ವರವೊಂದು ಕಂಪಿಸಿ ಕಾಡಿದರು
ಕೊಡೆಹಿಡಿದು ಕೈಯಲ್ಲಿ ನನ್ನನ್ನು ನಡೆಸಿದಂತೆ !
ಕನಸಾಗಿದೆ
ಮಾತುಬಾರದೆ ಬಿಕ್ಕಳಿಸಿ ಅಳುವಂತೆ
ಗಾಯ ಹೃದಯ ಮತ್ತೊಮ್ಮೆ ಯಾರೋ ತರಚಿ ಹೋದಂತೆ
ಮುಲಾಮು ಎಲ್ಲಿದೆ ಈ ನೋವಿಗೆ
ದೇವರೇ ಬಿಕ್ಕಳಿಸುತ್ತ ಕುಳಿತಂತೆ !

Wednesday, August 3, 2011

ಉಳಿದದ್ದು ನನಗೆ ಬಿಡು ....

ಮುಂಜಾವು...ಮಂಜು .....
ಇಲ್ಲಿದೆ ನವಿರ ಭಾವ...ಎಲೆ-ಮರ-ಗಿಡ-ಹೂ-ದುಂಬಿಗಳ ತಾಜಾ ಉಸಿರಾಟ
ಮುದ್ದು ಚಿಲಿ-ಪಿಲಿಗಳ ಸಣ್ಣ ದನಿಯ ಪಿಸುಮಾತು
ಆಗಷ್ಟೇ ಜನಿಸಿದ ಎಳೆ ಬಿಸಿಲುಹಸಿರು,
ಹೊಳೆಯುತ್ತಿರುವ ಬಿಂದು
ಎಲ್ಲೆಡೆ ನವೋನ್ಮಯ .........
ಆಹಾ! ಹೊಸ ಹುರುಪಿನ ಈ ದಿನ
ನನ್ನ ಜಗತ್ತೆಲ್ಲ ಅರಳಿದ ನವೊಲ್ಲಾಸ
ಇದಕೆಲ್ಲ ಯಾರು ಕಾರಣ
ನಿನ್ನ ಮೋಹಕ ನಸುನಗೆ?
ಆಗಿದ್ದಲ್ಲಿ, ಹೀಗೆಯೇ - ದಿನಕೊಮ್ಮೆ , just ಒಮ್ಮೆ
ನನ್ನ ನೋಡಿ ನಕ್ಕುಬಿಡು ....
ಉಳಿದದ್ದು ನನಗೆ ಬಿಡು ....

Tuesday, January 11, 2011

ಮೊದಲ ಹನಿಗಳು ...

ನೆನಪು
ನೀನಿದ್ದಾಗಲು - ಇರದಿದ್ದಾಗಲು ಕಾಡುತ್ತಿರುವ ನಿನ್ನ ಹಳೆಯ ಪ್ರೀತಿಯ ವರಸೆ !
ಪ್ರ(ಯತ್ನ)
ಮುರಿದ ಗೊಂಬೆಯ ಕೈ ಕಾಲು ಜೋಡಿಸಲು ವರುಷಗಳಿಂದ ಯೆಣಗಾಡುತ್ತಿರುವ ರೀತಿ !
ಕುರುಡು
ತಪ್ಪೆಂದು ತಿಳಿದರು ಅದೇ ನಿಟ್ಟಿನಲ್ಲಿಡುತ್ತಿರುವ ಹೆಜ್ಜೆ !

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...