Sunday, February 19, 2012

ಪ್ರದಕ್ಷಿಣೆ:

ಕೆಲವೊಂದು ಪದಗಳು ಮನಸ್ಸಿಗೆ ಇಷ್ಟವಾಗಿ ಹೋಗ್ತದೆ ಇಷ್ಟವಾಗದೇ ಹೋದದ್ದನ್ನು ಆಚೆ ತಳ್ಳಿಬಿಟ್ಟರೆ ಮನಸ್ಸು ನಿರಾಳ!. ಆದರೆ ಏನೇ ಆದರೂ ಇಷ್ಟ ಅಗ್ಬೇಕಂದ್ರೆ ಅದಕ್ಕೆ ಕಾರಣಗಳಿರಬೇಕ? ನನ್ನ ಮಟ್ಟಿಗೆ ಕೆಲವು ಪದಗಳು ಅಥವಾ ಘಟನೆಗಳು ಇಷ್ಟವಾಗಲು ಕಾರಣಗಳಿದ್ದರೆ - ಇನ್ನು ಕೆಲವಕ್ಕೆ ಕಾರಣವೇ ಇರೋಲ್ಲ.


ಮನಸ್ಸಿಗೆ ತುಂಬಾ ಇಷ್ಟವಾಗುವ ಕೆಲವು ಪದಗಳಲ್ಲಿ ಈಗಷ್ಟೇ ಸೇರ್ಪಡೆಯಾದ ಪದ 'ಪ್ರದಕ್ಷಿಣೆ'!
ಹೆಸರಿನಲ್ಲೇ ಭಕ್ತಿ, ಶ್ರದ್ಧೆ, ವಿನಯ ಎಲ್ಲವೂ ಒಮ್ಮಿಂದೊಮ್ಮೆಲೆ ಮೂಡಿಸುವ ಪದ ಅನಿಸಿತು.
ಮೊದಲಬಾರೀ ಈ ಹೆಸರು ಕೇಳಿದಾಗ..ನಮ್ಮೊಳಗೇ ಎಲ್ಲೋ ಇರುವ ಪದವಲ್ಲವೇ ಅನಿಸಿತು!!. ಏಕೆಂದರೆ ಕೆಲವಕ್ಕೆ ಕಾರಣಗಳೇ ಇಲ್ಲದ ಹಾಗೆ, ಮನುಷ್ಯ ತನ್ನೊಳಗೆ ಅರಿವಿದ್ದೋ, ಅರಿವಿಲ್ಲದೆಯೋ ಕೆಲವು ಭಾವನೆಗಳಿಗೆ 'ಪ್ರದಕ್ಷಿಣೆ' ಹಾಕುತ್ತಲೇ ಇರುತ್ತಾನೆ.

ಪ್ರದಕ್ಷಿಣೆ ಹೆಸರು ಕಿವಿಗೆ ಬಿದ್ದಾಗ, ಒಂದು ಗರ್ಭಗುಡಿಯ ಸುತ್ತ ಹೋಗಿ ಬಂದ ಭಾವನೆ! ದೇವಸ್ಥಾನಕ್ಕೆ ಹೋಗದೆ ದೇವರ ಸುತ್ತ ಪ್ರದಕ್ಷಿಣೆ ಹಾಕಿದ ಭಾವನೆ..! ಈ ಭಾವನೇನೆ ಇರಬಹುದು - ಈ ಹೆಸರು ಇಷ್ಟವಾಗಲು ಕಾರಣ.

'ಜಗದಗಲ ಒಂದು ಸುತ್ತು' ...ಸ್ನೇಹಿತರೇ, ಒಂದೇ ಸುತ್ತು ಸಾಕೆ.. ನನ್ನನ್ನು ಬಿಟ್ಟರೆ ನನ್ನ ವಾನರ ಸೇನೆಯೊಂದಿಗೆ ರಿಂಗ-ರಿಂಗ-ರೋಸೆಸ್ ಅಂತ ಸುತ್ಮೇಲೆ ಸುತ್ತು-ಸುತ್ತ್ಮೇಲೆ ಸುತ್ತು.. ಹೊಡೆಯುತಿದ್ದೆನೇನೋ!

ಸಧ್ಯಕ್ಕೆ ಜಗದಗಲ ಒಂದು ಸುತ್ತು ಅನ್ನುವಾಗ ಕಲ್ಪನೆಯಾಗಿದ್ದು, ಅದೊಂದು ಸಣ್ಣ ಭೂ-ಚೆಂಡಿನಂತೆ, ಆ ಭೂಮಿಯನ್ನ ತಬ್ಬಿಕೊಂಡಂತೆ, ಬಿರಬಿರನೆ ಓಡಿ ಒಂದು ಸುತ್ತು ಹೊಡೆದು ನಾನೇ ಫಸ್ಟ್ ಅಂತ ಏದುಸಿರು ಬಿಟ್ಟು ಹೇಳಿಕೊಂಡಂತೆ, ಇದಕ್ಕೂ ಮೀರಿ ಅನಿಸಿದ್ದು, 'ಹೇಳಿದಷ್ಟು ಸುಲಭವಾಗಿ, ವಾಸ್ತವತೆಯಲ್ಲಿ ಈ ಜಗತನ್ನು ಇಷ್ಟು ಬೇಗ ಒಂದು ಸುತ್ತು ಹೊಡೆದು ಬರಬಹುದೇ ಅಂತ.
ಒಂದೊಂದು ಜೀವಕ್ಕೆ ಒಂದೊಂದು 'ಜಗತ್ತು', ಒಬೊಬ್ಬರ ಭಾವನೆಯಲ್ಲಿ ಒಂದೊಂದು 'ಜಗತ್ತು' - ಈ ಪದಕ್ಕೂ ಪರಿಮಿತಿ ಎಲ್ಲಿದೆ? ಇದರ ಒಳಾರ್ಥ ಎಲ್ಲೆಲ್ಲಿಯ ತನಕ ಸೀಮಿತ?-ಹೌದು, ಸೀಮಾತೀತ!!

ಅದೇನೇ ಅದರು ಜಗತ್ತು ಕೈಗೆಟುಕಿಸಿದಂತ ಅನುಭವ ಕೊಟ್ಟಿದ್ದು ಈ ಪ್ರದಕ್ಷಿಣೆಯ 'ಜಗದಗಲ ಒಂದು ಸುತ್ತು'..
ನವಿರಾದ ನೆಂಟಸ್ತಿಕೆ ಬೆಳೆಯುತ್ತಿದೆ ಈ ಪದಗಳ ಜೊತೆ, ಈ ತಾಣದ ಜೊತೆ.
ನನಗರಿವಿಲ್ಲದೆ ಸುಲಭವಾಗಿ ಈ ಭಾವನೆಗಳನ್ನ ಮೂಡಿಸಿ ಪ್ರದಕ್ಷಿಣೆ!

ನಮ್ಮ ತಂಡವನ್ನು ನಾವು ಒಂದು ಸಮುದಾಯ ಎಂದು ಕರೆದುಕೊಳ್ಳಲು, ಅಂತರಜಾಲವೂ ಕಾರಣ ಬಿಡಿ. 3k ಅಂದರೇ ಅಚ್ಚರಿ ಕೆಲವರಿಗೆ. ಕನ್ನಡದಲ್ಲಿ ಮೂರುಖ ಎಂದು ಓದಿ, ನಮ್ಮನ್ನು ಲೀಲಾಜಾಲವಾಗಿ ಮತ್ತು ಅಕಾರಣವಾಗಿ(?!) ಮೂರ್ಖರ ಪಟ್ಟಿಗೆ ಸೇರಿಸಿಬಿಡುತ್ತಾರೆ. ಅದು 3k ಅಂದರೆ ಕನ್ನಡ-ಕವಿತೆ-ಕವನ ಎಂದು ಹೇಳಿದರೆ ಮುಸಿ ಮುಸಿ ನಗುತ್ತಾರೆ!!. ಕವಿತ-ಕವನ.....ಏನು ವ್ಯತ್ಯಾಸ ಎಂದು ಕೇಳಿದರೆ, ಕೇಳಿದವರ ಜೊತೆಗೆ ನಾವೂ ಮೂರ್ಖರೇ......?? ಗೊತ್ತಿಲ್ಲಪ್ಪ.

ಆದರೆ ನಾನಂತೂ ಮೂರ್ಖರ ತಂಡದ ನಾಯಕಿ- 'ಮಹಾನ್ ಮೂರ್ಖ 'ಎಂದೇ ಪ್ರಸಿದ್ದ. ಆದರೆ ನಮ್ಮ ಸುತ್ತಲೂ ಹೀಗೆ 'ಪ್ರದಕ್ಷಿಣೆ' ಅರ್ಥ ಕಂಡುಕೊಂಡಿದ್ದರೆ ಅದಕ್ಕೆ ನಾವು,ಕವಿತೆ-ಕವನಕ್ಕಿಂತಲೂ ಕನ್ನಡ ಪ್ರೀತಿಯೇ ದೊಡ್ಡದು ಎಂದು ನಂಬಿದ್ದೇವೆ-ಆ ಮೂಲಕ ನಾವು ಮೂರ್ಖರಲ್ಲ ಸ್ವಾಮಿ.

ನಮ್ಮ ಬಂಡವಾಳದ ಬಗ್ಗೆಯೂ ಕುತೂಹಲ ಸಹಜ. ನಮ್ಮಲ್ಲೂ 'ಬಂಡವಾಳಶಾಹಿ'ಗಳಿದ್ದಾರೆ. ಮೂಲ ಬಂಡವಾಳ-ಕನ್ನಡ ಪರ ಮನಸ್ಸು. ಅದನ್ನು ತಂದು ಇಲ್ಲಿ ಹಾಕಿದರೆ ಮುಗಿಯಿತು. ಮತ್ತೆ ನಮ್ಮ ಸದಸ್ಯರುಗಳ ಭಾವನೆಗಳೇ ಇದರ ಬಂಡವಾಳ............!
ಆ ಭಾವನೆಗಳ ಖಜಾನೆ ಹೊತ್ತು ಪ್ರದಕ್ಷಿಣೆ ಹಾಕಲು ಸಜ್ಜಾಗಿರುವೆ. ನಿಮ್ಮ ಪ್ರೀತಿ ಬಯಸುತ್ತ........ ಪ್ರೀತಿಯೊಂದಿಗೆ ಮೆಚ್ಚುಗೆಯೂ ಇರಲಿ...ತಪ್ಪಿದಲ್ಲಿ ತಿದ್ದಲು ಮರೆಯದಿರಿ.....ನಾವು ಮೂರ್ಖರಾದರೂ ನೀವು ಅಲ್ಲವಲ್ಲ......??

ಅಂದ ಹಾಗೆ...ಇದು ಮುಗಿಯುವ ಕಥೆಯಲ್ಲ......ಕಥೆಯ ಆರಂಭ ಅಷ್ಟೇ.....ಕಥೆ ಮುಂದೆಯೂ ಇದೆ.

ಬಾಳೊಂದು ಭಾವಗೀತೆ

ನಿಮ್ಮೊಂದಿಗೆ

No comments:

Post a Comment

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...